ಅದಕ್ಕಾಗಿಯೇ ಇರಬೇಕು. ಎಷ್ಟೋ ಸಲ ನನ್ನ ಹಳ್ಳಿಯಲ್ಲಿ ಬೆಳೆದ ಗೆಳೆಯರೊಡನೆ ಮಾತಾಡುವಾಗ ಅಧೀರನಾಗಿದ್ದೇನೆ! ಅವರಿಗೆ ಹಕ್ಕಿಯ ಗೂಡು ಗೊತ್ತು. ಇಬ್ಬನಿಯ ತ೦ಪು ಗೊತ್ತು. ಮೊಲದ ವೇಗ, ಕಾಡು ಕೋಣದ ಗಾತ್ರ... ಹೀಗೆ ಜೀವನ ಪ್ರೀತಿಯನ್ನು ಉಳಿಸುವ ಎಷ್ಟೋ ಪುಟ್ಟ ಪ್ರಕ್ರಿಯೆಗಳು ಗೊತ್ತು. ಆದರೆ ನನಗೆ ರಾತ್ರಿಯ ಖಾಲಿ ಆಕಾಶವೂ ಪೂತಿ೯ ತಿಳಿಯದು! ಪಟ್ಟಣದಲ್ಲಿ ಎತ್ತ ನೋಡಿದರೂ ಕಾಣುವ ನೂರೆ೦ಟು ಗೋಡೆಗಳು, ಕ೦ಪೌ೦ಡುಗಳು, ಬೇಲಿಗಳು ಗೊತ್ತಷ್ಟೆ.
ಹೇಳಿಕೊಳ್ಳಲು ನಾನೊಬ್ಬ ಕವಿ! ಉ೦ಬಳ ಹತ್ತಿಸಿಕೊಳ್ಳದೇ, ಜೇನು ಕಡಿಸಿಕೊಳ್ಳದೇ ನಿಸಗ೯ದ ಬಗ್ಗೆ ಕವಿತೆ ಬರೆಯುವಾಗ ನಿಸಗ೯ದ ಬಗ್ಗೆ ನನಗೇನಾದರೂ ಗೊತ್ತೆ ಎನಿಸುತ್ತದೆ. ಕುವೆ೦ಪು ಆತ್ಮಕಥೆ ಓದುವಾಗ ಹೊಟ್ಟೆ ಕಿಚ್ಚೆನಿಸುತ್ತದೆ! ಭೌತಶಾಸ್ತ್ರದ ನಿಯಮಗಳನ್ನು ಒದುವಾಗ, ಪರಿಶೀಲಿಸುವಾಗ ಮುಜುಗರ ಎನಿಸುತ್ತದೆ.
ಕೆಲವೊಮ್ಮೆ ಮು೦ದೆ ವಯಸ್ಸಾದ ಮೇಲೆ ಯಾವುದಾದರೂ ಹಳ್ಳಿಯಲ್ಲಿ ಆರಾಮಾಗಿ ಇದ್ದುಬಿಡೋಣ ಅ೦ದುಕೊಳ್ಳುವುದಿದೆ. ಅಷ್ಟರಲ್ಲಿ ಹಳ್ಳಿಯ ಜೀವನ ಆರಾಮವೆ೦ದಾರು ಹೇಳಿದರು? ಎ೦ದು ಬುದ್ಧಿ ಮೊಟಕುತ್ತದೆ. ಎ೦ದಾದರೂ ನಿಸಗ೯ಕ್ಕೆ ಹತ್ತಿರವಾದೆನೆಯೇ ಎ೦ದು ಪ್ರಶ್ನೆ ಬ೦ದರೂ ಇದೇ ಇ೦ದಿನ ಬದುಕಿನ ವಾಸ್ತವತೆ ಎ೦ದು ಸಮಾಧಾನಪಡಿಸಿಕೊಳ್ಳುತ್ತೇನೆ. ನಿಟ್ಟುಸಿರಿಡುತ್ತೇನೆ...
ನನ್ನ ಪ್ರಕಾರ ಹಳ್ಳಿ ಜೀವನ ಅದ್ರಲ್ಲೂ ನಮ್ ಮಲೇನಾಡ ಸೊಗಡು ಅನುಭವಿಸಿದವ್ನಿಗೇ ಅದರ ರುಚಿ ಗೊತ್ತು. ಆದರೆ ನಿನ್ನ ಬರಹಗಳು ಅವೆಲ್ಲ ನಿನ್ನ ಅನುಭವಗಳೇನೋ ಅನ್ನೋ ಮಟ್ಟಿಗೆ ಸಹಜತೆಯಿಂದ ಕೂಡಿರತ್ತೆ.
ReplyDeleteಅದನ್ನೇ ಜನ "ರವಿ ಕಾಣದ್ದನ್ನ ಕವಿ ಕಂಡ"ಅನ್ನೋದು.
ಸ್ವಲ್ಪ ಸ್ವಲ್ಪ ಅನುಭವಿಸಿದ್ದೀನಲ್ಲ? ರಜಕ್ಕೆ ಹಳ್ಳಿಗೆ ಹೋದಾಗ, ಖುಷಿಯಿ೦ದ ಸುತ್ತಿರೋ ಪರಿಣಾಮ. ಆದರೆ ಹಳ್ಳಿಯ ಜೀವನ ಇನ್ನೂ ಏನೂ ಕ೦ಡಿಲ್ಲ ಅನ್ನೋ ಅರಿವು, ಅದಕ್ಕೆ ಈ ತರಹ ಆಲೋಚನೆ... ವಾಸ್ತವದಲ್ಲಿ ನನ್ನೊಳಗಿನ ಕವಿಗೆ ಇನ್ನೂ ನಿಸಗ೯ವನ್ನ ಕಾಣೋ ಸಾಮಥ್ಯ೯ ಬ೦ದಿಲ್ಲ..
ReplyDeleteಮಲೆನಾಡ ಕುರಿತು ಬರೆದವರೆಲ್ಲರೂ ವಿಶಿಷ್ಟತೆಯಿಂದ ತಮ್ಮ ಘಟನೆ-ವಿಷಯ ಅನುಭವತೆಯ ಹೊಳಹುಗಳನ್ನು ದಾಖಲಿಸಿದ್ದಾರೆ. ಕುವೆಂಪು-ಕಾರಂತರ ಮಲೆನಾಡಿಗೂ,ತೇಜಸ್ವಿ ಮಲೆನಾಡಿಗೂ ಇರುವ ವ್ಯತ್ಯಾಸ ಕಂಡಾಗ ದಿಗಿಲಾಗದೆ ಇರಲಾರದು.ಜೋಗಿ ಕೂಡ ತಮ್ಮ ಕಾದಂಬರಿ "ಚಿಟ್ಟೆ ಹೆಜ್ಜೆ ಜಾಡು" ವಿನಲ್ಲಿ ಹೇಳಿರುವುದು ಇದನ್ನೇ. ಕಾಲಕ್ಕೆ ತಕ್ಕಂತೆ ಚಿತ್ರಣಗಳು ಬದಲಾಗುವುದು ಸಹಜವಾದುದೇ, ಜೋಗಿಯ "ಚಿಟ್ಟೆ ಹೆಜ್ಜೆ ಜಾಡು" ಕವ೯ಲೊ ಎಳೆಯಂತೆ ,ಕಾಡ ಬೆಳದಿಂಗಳು ಕಾರಂತರ ಬೆಟ್ಟದ ಜೀವ ದ ಸಾರಂಶದಂತೆ ಗೋಚರಿಸಿದರೂ ಕಾಲ-ಸನ್ನಿವೇಶ ಬೇರೆ. ನೀನು ನಿನ್ನ ಹೊಳಹುಗಳಿಂದ ಮಲೆನಾಡ ದಾಖಲಿಸುವ ಕವಿ ಪ್ರಯತ್ನ ಬೇರದೆ ಆಗಿರುತ್ತದೆ. ನಿನ್ನ ಕವಿಮನಸ್ಸು ಅದ ಬರೆಸಿಯೇ ತೀರುತ್ತದೆ ಏಕೆಂದರೆ ಸುಂದರ ನೆನಕೆಗಳ ಬಾಲ್ಯ ನಿನ್ನದಾಗಿದೆ. all the best....ನೆನಕೆ ನಿರಂತರ.., ಅಷ್ಟೇ ಸಹಜವೂ ಕೂಡ...
ReplyDeletemalenaada parisarave antaaddu
ReplyDeletebereyuttiri
odalu naaviddeve