ಆಸೆಗಳ ತೊರೆದ ಬುದ್ಧ ದಪ್ಪಗಿದ್ದ
ಸಾವು, ಮುಪ್ಪು,
ಬದುಕಿನ ವಿಷಾದಗಳನ್ನು
ಕಂಡಿದ್ದ ಬುದ್ಧ-
ಇವನು ಅವನೇ
ಮನೆಗಳಲ್ಲಿ ನೆಲೆಯಾಗದೇ
ಅಲೆಯುತ್ತಿದ್ದವ,
ಒಂದಗಲದ ಬಟ್ಟೆಯನ್ನು ಹೇಗೋ ಸುತ್ತಿಕೊಂಡು
ಸೋಜಿಗವಾಗಿದ್ದವ
ನಗುವಿನಿಂದಲೇ ನಿರ್ವಾಣ ತಲುಪಿದ್ದನೆಂದು
ಊರಿನಲ್ಲಿ ಸುದ್ದಿಯಾದಾಗ ಯಾರೂ ನಂಬಿರಲಿಲ್ಲ
ಶಿಷ್ಯರಿರದ, ಭೋದಿಸಿರದ ಬುದ್ಧ
ಹಾರಿಹೋಗುವ ತರಗೆಲೆಗಳಲ್ಲಿ,
ಸಂಪಿಗೆ ಹೂವುಗಳಲ್ಲಿ,
ಊರೂರಿಗೆ ನಗುವನ್ನು ಪಸರಿಸಿದ್ದನೆಂದರೆ
ಇತಿಹಾಸವನ್ನೋದಿದ ನೀವು
ಒಪ್ಪಲಾರಿರಿ - ತರಗೆಲೆಗಳ
ತುಂಬೆ ನೊಣಗಳ
ಸದ್ದು ಕೇಳದಂತೆ ಕಿವುಡಾಗಿ.
ಬುದ್ಧನನ್ನು ಕಾಣಲು
ಧ್ಯಾನಿಸುವುದಲ್ಲ
ಮನಸ್ಸನ್ನು ಮರೆಯಬೇಕಿಲ್ಲ
ಸುಮ್ಮನೆ ಟೀವಿ ಆರಿಸಿ
ಫೋನ್ ಮುಚ್ಚಿಟ್ಟು
ಆರಾಮದಲ್ಲಿ ಕುಳಿತು ಆಲಿಸಿದರೆ ಸಾಕು
ಡೊಳ್ಳುಹೊಟ್ಟೆಯ ಬುದ್ಧ
ಪ್ರತ್ಯಕ್ಷನಾಗದಿದ್ದರೂ
ಪ್ರಕೃತಿಯ ಗುಂಯ್ಗುಡುವಿಕೆಯಲ್ಲಿ
ಬುದ್ಧನ ನಗು ಪಸರಿಸುತ್ತಿರುವುದನ್ನು-
ನೀವೇ ಕಾಣಬಹುದು
ಸಾವು, ಮುಪ್ಪು,
ಬದುಕಿನ ವಿಷಾದಗಳನ್ನು
ಕಂಡಿದ್ದ ಬುದ್ಧ-
ಇವನು ಅವನೇ
ಮನೆಗಳಲ್ಲಿ ನೆಲೆಯಾಗದೇ
ಅಲೆಯುತ್ತಿದ್ದವ,
ಒಂದಗಲದ ಬಟ್ಟೆಯನ್ನು ಹೇಗೋ ಸುತ್ತಿಕೊಂಡು
ಸೋಜಿಗವಾಗಿದ್ದವ
ನಗುವಿನಿಂದಲೇ ನಿರ್ವಾಣ ತಲುಪಿದ್ದನೆಂದು
ಊರಿನಲ್ಲಿ ಸುದ್ದಿಯಾದಾಗ ಯಾರೂ ನಂಬಿರಲಿಲ್ಲ
ಶಿಷ್ಯರಿರದ, ಭೋದಿಸಿರದ ಬುದ್ಧ
ಹಾರಿಹೋಗುವ ತರಗೆಲೆಗಳಲ್ಲಿ,
ಸಂಪಿಗೆ ಹೂವುಗಳಲ್ಲಿ,
ಊರೂರಿಗೆ ನಗುವನ್ನು ಪಸರಿಸಿದ್ದನೆಂದರೆ
ಇತಿಹಾಸವನ್ನೋದಿದ ನೀವು
ಒಪ್ಪಲಾರಿರಿ - ತರಗೆಲೆಗಳ
ತುಂಬೆ ನೊಣಗಳ
ಸದ್ದು ಕೇಳದಂತೆ ಕಿವುಡಾಗಿ.
ಬುದ್ಧನನ್ನು ಕಾಣಲು
ಧ್ಯಾನಿಸುವುದಲ್ಲ
ಮನಸ್ಸನ್ನು ಮರೆಯಬೇಕಿಲ್ಲ
ಸುಮ್ಮನೆ ಟೀವಿ ಆರಿಸಿ
ಫೋನ್ ಮುಚ್ಚಿಟ್ಟು
ಆರಾಮದಲ್ಲಿ ಕುಳಿತು ಆಲಿಸಿದರೆ ಸಾಕು
ಡೊಳ್ಳುಹೊಟ್ಟೆಯ ಬುದ್ಧ
ಪ್ರತ್ಯಕ್ಷನಾಗದಿದ್ದರೂ
ಪ್ರಕೃತಿಯ ಗುಂಯ್ಗುಡುವಿಕೆಯಲ್ಲಿ
ಬುದ್ಧನ ನಗು ಪಸರಿಸುತ್ತಿರುವುದನ್ನು-
ನೀವೇ ಕಾಣಬಹುದು
Superb ☺
ReplyDelete